‘ಶ್ರವಣಕುಮಾರ’ ಮುಕ್ತಾಯ
Posted date: 29 Thu, Sep 2016 – 11:28:30 AM

 ಶ್ರೀ ವಾಲ್ಮೀಕಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ‘ಶ್ರವಣಕುಮಾರ’ ಚಿತ್ರ ತಯಾರಾಗಿದೆ. ಬೋರಯ್ಯ ಆರ್.ಎನ್. ಮದಕರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಂತಿ ಸಿರಾ ಅವರು ಚಿತ್ರಕತೆ, ಸಂಭಾಷಣೆ, ಸಾಹಿತ್ಯದ ಜೊತೆಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಎ.ಟಿ. ರವೀಶ್ ಅವರ ಸಂಗೀತ, ಎಂ.ಆರ್. ಶಶಿಧರ್ ಸಂಕಲನ, ಉಮೇಶ್ ಕಂಪ್ಲಾಪುರ ಅವರ ಛಾಯಾಗ್ರಹಣ, ರಮೇಶ್ ಮತ್ತು ತಂಡದ ಕಲಾ ನಿರ್ದೇಶನ ‘ಶ್ರವಣಕುಮಾರ’ ಚಿತ್ರಕ್ಕಿದೆ.
ತಾರಾಗಣದಲ್ಲಿ, ಪ್ರವೀಣ್ ರಬಕವಿ ನೀನಾಸಂ, ಬಿ. ಶಿವಾನಂದ ತುರುವನೂರು, ಬನವಾಸಿ ಚಿತ್ರದ ನಿರ್ದೇಶಕ ಧೀರಜ್ ಸೂರ್ಯ, ಪುನೀತ್ ಗೌಡ, ದಯಾನಂದ್, ರಶ್ಮಿ, ಓಬಣ್ಣ ರುದ್ರಮ್ಮನಹಳ್ಳಿ, ಮೀಸೆ ರಾಜಣ್ಣ, ಉದಯ ರವಿ ದೊಡ್ಡಘಟ್ಟ ಮುಂತಾದವರಿದ್ದಾರೆ.
 ‘ಶ್ರವಣಕುಮಾರ’ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಚಿತ್ರದುರ್ಗ, ಹೊಸದುರ್ಗ, ಹುಳಿಯಾರು ಕಾಡು ಮತ್ತು ಮಾರಿ ಕಣಿವೆ ಸುತ್ತ ಮುತ್ತ ೨೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ತ್ರೇತಾಯುಗದ ಪೌರಾಣಿಕ ಕಥಾಹಂದರ ಹೊಂದಿರುವ ‘ಶ್ರವಣಕುಮಾರ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.
ಶಿವಾನಂದ್, ವಿಜಯ್ ಗುಲ್ಜಾರ್, ಟಿ.ಎನ್. ನಾಗೇಶ್ ಅವರ ಬಳಿ ಸಹ ಮತ್ತು ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ಬಂತಿ ಸಿರಾ ಅವರು ‘ಶ್ರವಣಕುಮಾರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇನ್ನು ನಿರ್ಮಾಪಕ ಚಿತ್ರದುರ್ಗದ ಬೋರಯ್ಯ ಆರ್.ಎನ್. ಮದಕರಿ ಅವರು ಮೊದಲಿಂದಲೂ ಸಿನಿಮಾಗಳ ಬಗ್ಗೆ ಅಪಾರವಾದ ವ್ಯಾಮೋಹ ಇರಿಸಿಕೊಂಡಿದ್ದವರು. ಹೀಗಾಗಿ ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸುಂದರವಾಗಿ ಮೂಡಿಬಂದಿದೆಯಂತೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed